ಮೈಯೇ ಇಲ್ಲ ಬರೀ ತಲೆ

ಮೈಯೆ ಇಲ್ಲ, ಬರೀ ತಲೆ,
ನೆತ್ತಿಗೆ ಜುಂಗಿನ ಬಿಗೀ ಬಲೆ.
ನಾ ಯಾರೆಂದು ಹೇಳುವಿಯಾ,
ಸೋತರೆ ಕಾಲಿಗೆ ಬೀಳುವಿಯಾ?

ಮುಂಜಿ ಗಿಂಜಿ ಆಗಿಲ್ಲ
ಜನಿವಾರಾನೇ ಹಾಕಿಲ್ಲ
ಆದ್ರೂ ತಲೇಲಿ ಪಿಳ್ ಜುಟ್ಟು
ಹೇಳ್ ನೋಡೋಣ ನನ್ನ ಗುಟ್ಟು?

ದೇವರಿಗೋ ನಾ ಬಲು ಇಷ್ಟ
ನನಗೋ ಅವನಿಂದಲೆ ಕಷ್ಟ
ಅವನ್ಹೆಸರಲ್ಲಿ ತಲೆ ಒಡೆದು
ತಿಂತಾರೆ ನನ್ನೆದೆ ತುರಿದು?

ನನ್ನನ್ ಹೊಡೆಯೋ ಹಾಗಿಲ್ಲ
ಹೊಡೆದೋರ್‍ ಕೈಯೇ ನೋಯುತ್ತೆ,
ನಾನು ಜೊತೇಲಿ ಸೇರ್‍ಕೊಂಡ್ರೆ
ತಿಂಡಿ ಬಲು ರುಚಿ ಆಗುತ್ತೆ.

ನಾ ಯಾರೆಂದು ಹೇಳವಿಯಾ
ಒಗಟಿಗೆ ಉತ್ತರ ನೀಡುವಿಯಾ
ಇಲ್ಲವೆ ಸೋಲನ್ನೊಪ್ಪುವಿಯಾ,
ತೆಪ್ಪನೆ ಕಾಲಿಗೆ ಬೀಳುವಿಯಾ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೭೦
Next post ಎಲ್ಲಿದ್ದೆ ಇಲ್ಲೀ ತನಕ?

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys